Wednesday, 14 April 2021

ಸಿಂಧೂ/ ಹರಪ್ಪ ನಾಗರಿಕತೆ ನೋಟ್ಸ್

* ಸಿಂಧೂನಾಗರಿಕತೆ :- 
* ಪತ್ತೆ ಹಚ್ಚಿದ್ದು - ಕನ್ನಿಂಗ್ ಹ್ಯಾಂ 
* ಈಸ್ಟ್ ಇಂಡಿಯಾ ಕಂಪನಿಯ ಸೇವೆಯಲ್ಲಿದ್ದ ಚಾರ್ಲ್ಸ್ ಮ್ಯಾಸನ್ (Charles Masson) ಮೊದಲ ಬಾರಿಗೆ 1826 ರಲ್ಲಿ ಹರಪ್ಪ ನೆಲೆಗೆ ಭೇಟಿ ನೀಡಿದ, ಆತ ಅದನ್ನು ಅಲೆಕ್ಸಾಂಡರ್ ಪುರೂರವನನ್ನು 2300 ವರ್ಷಗಳ ಹಿಂದೆ ಸೋಲಿಸಿದ ಸ್ಥಳ ಎಂದು ಭಾವಿಸಿದ್ದನು. 
* ಚಾರ್ಲ್ಸ್ ಮ್ಯಾಸನ್ ಹರಪ್ಪನ ನೆಲೆಯನ್ನು ಗುರುತಿಸಿದ ಮೊದಲಿಗನಾದರು ತಪ್ಪಾದ ನಿರ್ಣಯ ಮಾಡಿದ್ದನು.
* ಒಂದು ಶತಮಾನದ ಹಿಂದಿನವರೆಗೂ ಭಾರತದ ಚರಿತ್ರೆಯನ್ನು ವೇದಗಳ ಕಾಲದಿಂದ ಅಧ್ಯಯನ ಮಾಡಲಾಗುತ್ತಿತ್ತು.
* ಹರಪ್ಪ- ರಾವಿ ನದಿಯ ಎಡ ದಂಡೆ ಮೇಲಿದೆ - ಪತ್ತೆಹಚ್ಚಿದವರು  ದಯಾರಾಮ್ ಸಹಾನಿ -1920-21 
* ಮೆಹೆಂಜೋದಾರೋ - R.D.ಬ್ಯಾನರ್ಜಿ (ರಖಲ್ ದಾಸ್ ಬ್ಯಾನರ್ಜಿ) -1922 
* ಮೊದಲ ಲೇಖನ - ಇಲುಸ್ಟ್ರೇಟೆಡ್ ಪತ್ರಿಕೆಯಲ್ಲಿ ಪ್ರಕಟ
* ಹರಪ್ಪ ನಾಗರಿಕತೆಯ ಶೋಧವು ಭಾರತದ ಇತಿಹಾಸವನ್ನು ವೇದಗಳಿಗೂ ಸು. 2000 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿತು
* ಆರಂಭದಲ್ಲಿ ಸಿಂಧೂ ಮತ್ತು ಅದರ ಉಪನದಿಗಳು ಬಯಲಿನಲ್ಲಿ ನೆಲೆಗಳು ಪತ್ತೆಯಾಗಿದ್ದರಿಂದ ಸಿಂಧೂ ಬಯಲಿನ ನಾಗರಿಕತೆ ಎಂದು ಕರೆದರು 
* ಅಂದಿನಿಂದ ಇಂದಿನವರೆಗೂ ನಡೆದಿರುವ ಶೋಧನೆಗಳಲ್ಲಿ 1500ಕ್ಕೂ ಹೆಚ್ಚು ನೆಲೆಗಳು ಕಂಡುಬಂದಿವೆ
* ಪರಿಣಾಮವಾಗಿ ಸಿಂಧೂ ಬಯಲಿನ ಆಚೆಗೂ ನೆಲೆಗಳು ಕಂಡುಬಂದಿದ್ದರಿಂದ ಸಿಂಧೂ ನಾಗರಿಕತೆ ಎನ್ನುವ ಬದಲು ಮೊದಲ ನೆಲೆಯಾದ ಹರಪ್ಪ ಹೆಸರಿನಿಂದ ಹರಪ್ಪ ನಾಗರಿಕತೆ ಎಂದು ಕರೆಯಲಾಗಿದೆ
* 13 ಲಕ್ಷ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಪ್ಪ ನಾಗರಿಕತೆಯು ಹರಡಿದೆ
* ಹರಪ್ಪ ನಾಗರಿಕತೆಯ ವ್ಯಾಪ್ತಿ
* ಪೂರ್ವದಲ್ಲಿ - UPಯ ಅಲಂಗೀರ್ 
* ಪಶ್ಚಿಮದಲ್ಲಿ - ಬಲೂಚಿಸ್ತಾನದ ಸೂಕ್ತ ಜಂಡರ್
* ಉತ್ತರದಲ್ಲಿ JKದ ಮಾಂಡು 
* ದಕ್ಷಿಣದಲ್ಲಿ - MRದ ದೈಮಾಬಾದ್ 
* ಸಿಂಧೂ ನಾಗರಿಕತೆಯನ್ನು ವಿವಿಧ ಹೆಸರುಗಳಿಂದ ಕರೆದವರು  
* ಜಾನ್ ಮಾರ್ಷಲ್ - ಹರಪ್ಪ ನಾಗರಿಕತೆ 
* ವಿ.ಎ.ಸ್ಮಿತ್ - ಇಂಡೋ ಸುಮೇರಿಯನ್ ನಾಗರಿಕತೆ 
* R.D.ಬ್ಯಾನರ್ಜಿ - ಇಂಡೋ ಕ್ರಿಪ್ಟಾನ್ ನಾಗರಿಕತೆ
* ನಗರಗಳು
* ಪಾಕಿಸ್ತಾನದಲ್ಲಿ - ಹರಪ್ಪ, ಮೆಹೆಂಜೋದಾರೊ
* ಭಾರತದಲ್ಲಿ - ರಾಜಸ್ಥಾನದ ಕಾಲಿಬಂಗನ್, ಗುಜರಾತಿನ ಲೋಥಾಲ್, ಗುಜರಾತಿನ ದೋಲವೀರ, ಹರಿಯಾಣದ ರಾಖಿಘರಿ
* ನಗರ ಯೋಜನೆ- 
* ಹರಪ್ಪ ನಾಗರಿಕತೆಯ ನಗರಗಳು ಯೋಜನಾಬದ್ಧವಾಗಿ ನಿರ್ಮಾಣಗೊಂಡಿದ್ದವು
* ನಗರಗಳ ರಕ್ಷಣೆಗಾಗಿ ಕೋಟೆಗಳನ್ನು ಕಟ್ಟಲಾಗಿತ್ತು
* ಹರಪ್ಪ ನಗರಗಳ ವಿಶೇಷ ಲಕ್ಷಣಗಳು - ಅಗಲವಾದ ರಸ್ತೆಗಳು, ಸಾರ್ವಜನಿಕ ಬಾವಿಗಳು, ಉಪ್ಪರಿಗೆಯ ಮನೆಗಳು, ಅಚ್ಚುಕಟ್ಟಾದ ಒಳಚರಂಡಿ ವ್ಯವಸ್ಥೆ
* ಒಳಚರಂಡಿ ವ್ಯವಸ್ಥೆ ನಮ್ಮ ಪ್ರಾಚೀನರ ಅಪೂರ್ವ ಸಾಧನೆ 
* ಸ್ವಚ್ಛತೆಗೆ ನೀಡಿರುವ ಆದ್ಯತೆಯ ಇಂದಿಗೂ ಮಾದರಿಯಾಗಿದೆ
* ಹರಪ್ಪ ನಗರ ಯೋಜನೆ ವ್ಯವಸ್ಥೆಯನ್ನು ದಿನ ಬೇರೆ ಯಾವ ಪ್ರಾಚೀನ ನಾಗರಿಕತೆಯನ್ನು ಕಾಣಲಾರೆವು
* ಮೊಹೆಂಜೋದಾರೋ ನಗರದಲ್ಲಿ ಸಾರ್ವಜನಿಕ ಸ್ನಾನಗೃಹವಿದ್ದು, ಅದರ ಸುತ್ತಲೂ ಕೊಠಡಿಗಳಿವೆ
* ಹರಪ್ಪದಲ್ಲಿ 6 ಕಣಜಗಳಿದ್ದು ಸಮೀಪದಲ್ಲಿ ಕಾರ್ಮಿಕರ ಮನೆಗಳಿವೆ
* ಆರ್ಥಿಕ ಜೀವನ - * ಪ್ರಮುಖ ಕಸುಬುಗಳು- ಹತ್ತಿ & ಉಣ್ಣೆ ಬಟ್ಟೆ ನೂಲುವುದು, ಸುಟ್ಟ ಇಟ್ಟಿಗೆಗಳ ತಯಾರಿಕೆ, ಪಶುಪಾಲನೆ
* ಎತ್ತು, ಕೋಣ, ಆಡು, ಕುರಿ, ಬೆಕ್ಕು, ನಾಯಿ, ಹಂದಿ, ಒಂಟೆ, ಕತ್ತೆಗಳನ್ನು ಸಾಕುತ್ತಿದ್ದರು 
* ಜಗತ್ತಿನಲ್ಲಿ ಮೊದಲ ಬಾರಿಗೆ ಹತ್ತಿಯನ್ನು ಬೆಳೆದ ದೇಶ - ಭಾರತ 
* ಸಿಂಧೂ ಪ್ರದೇಶದಿಂದ ಉತ್ಪಾದಿಸಲಾಗುತ್ತಿದ್ದ ಕಾರಣ ಹತ್ತಿಯನ್ನು ಗ್ರೀಕ್ ಭಾಷೆಯಲ್ಲಿ ಸಿಂಧೂನ್ ಎಂದು ಕರೆಯುತ್ತಿದ್ದರು
* ಮೆಸಪಟೋಮಿಯನ್ನರು ಹರಪ್ಪ ನಾಗರಿಕತೆಯನ್ನು ಮೆಲುಹ ಎಂದು ಕರೆಯುತ್ತಿದ್ದರು 
* ಲೋಥಾಲ್ ಬಂದರಿನ ಮೂಲಕ ಅರಬ್ಬಿ ಸಮುದ್ರ ಮಾರ್ಗದಲ್ಲಿ ವ್ಯಾಪಾರ ನಡೆಸುತ್ತಿದ್ದರು 
* ಹರಪ್ಪ ನಾಗರಿಕತೆಯ ಜನರು ಬಳಸುತ್ತಿದ್ದ ಚಿನ್ನವು ಕೋಲಾರದ ಚಿನ್ನದ ಗಣಿಯಿಂದ ಪೂರೈಕೆ ಆಗುತ್ತಿತ್ತು 
* ಸಾಮಾಜಿಕ ಜೀವನ
* ಹರಪ್ಪ ನಾಗರಿಕತೆಯಲ್ಲಿ ಸ್ತ್ರೀ-ಪುರುಷರಿಬ್ಬರೂ ಅಲಂಕಾರ ಪ್ರಿಯರಾಗಿದ್ದರು 
* ಸ್ತ್ರೀಯರು ಅನೇಕ ವಿಧದ ಕಂಠೀಹಾರ, ಬಳೆ, ಉಂಗುರ, ಕಿವಿಯ ಓಲೆ, ಸೊಂಟಪಟ್ಟಿ, ಕಾಲಿನ ಕಡಗ (ನೂಪುರ) ಗಳು ಮೊದಲಾದ ಆಭರಣಗಳನ್ನು ಧರಿಸುತ್ತಿದ್ದರು 
* ಕಾಂತಿ ವರ್ಧಕಗಳನ್ನು ಬಳಸುತ್ತಿದ್ದರು
* ಸುಗಂಧ ದ್ರವ್ಯಗಳ ಬಳಕೆ ಅವರಿಗೆ ತಿಳಿದಿತ್ತು 
* ಸ್ತ್ರೀಯರಷ್ಟೇ ಪುರುಷರು ಕೂಡ ಅಲಂಕಾರ ಪ್ರಿಯರು 
* ಗೋಲಿ ಚೆಂಡು ಮತ್ತು ಪಗಡೆ ಅವರ ಆಟಗಳಾಗಿದ್ದವು
* ಗೂಳಿ ಕಾಳಗ ಜನರ ಮನೋರಂಜನೆಯ ಕ್ರೀಡೆಯಾಗಿತ್ತು 
* ಕಲೆ
* ಅವಶೇಷಗಳ ಪೈಕಿ ಜೇಡಿ ಮಣ್ಣಿನ ಮಾತೃ ದೇವತೆಗಳ ಚಿಕ್ಕ ಮೂರ್ತಿಗಳು ಭಾರಿ ಸಂಖ್ಯೆಯಲ್ಲಿ ದೊರಕಿವೆ 
* ಮಕ್ಕಳಿಗಾಗಿ ಆಟಿಕೆಯನ್ನು ಎತ್ತಿನ ಬಂಡಿ ಹಾಗೂ ಗೊಂಬೆಗಳಿದ್ದವು 
* ಸು. 2000ಕ್ಕೂ ಹೆಚ್ಚು ಮುದ್ರೆಗಳು ಸಿಕ್ಕಿವೆ
* ಧಾರ್ಮಿಕ ಜೀವನ
* ಹರಪ್ಪನ್ನರು ಪಶುಪತಿ (ಶಿವ) & ಮಾತೃ ದೇವತೆಯನ್ನು ಪೂಜಿಸುತ್ತಿದ್ದರು 
* ಅಶ್ವತ ಮರ, ಸೂರ್ಯ, ಭೂಮಿ, ಜಲ, ನಾಗರಹಾವು ಗಳನ್ನು ಆರಾಧಿಸುತ್ತಿದ್ದರು 
* ಕಾಲಿಬಂಗನ್ ಮತ್ತು ಲೋಥಾಲ್ ಮುಂತಾದ ನಗರಗಳಲ್ಲಿ ಬೆಂಕಿಯ ಕುಂಡಗಳು ಕಂಡುಬಂದಿವೆ
* ಲಿಪಿ
* ಹರಪ್ಪ ಜನರು ತಮ್ಮದೇ ಆದ ಲಿಪಿ ಮತ್ತು ಭಾಷೆಯನ್ನು ಬಳಸುತ್ತಿದ್ದರು
* ಹರಪ್ಪ ಲಿಪಿಯನ್ನು ಅರ್ಥೈಸುವುದು ಇನ್ನೂ ಸಾಧ್ಯವಾಗಿಲ್ಲ 
* ನಗರಗಳ ಅವನತಿಗೆ ಕಾರಣಗಳು
* ಸಿಂಧೂ ಮತ್ತು ಅದರ ಉಪನದಿಗಳಲ್ಲಿ ಆಗಾಗ ಉಂಟಾಗುತ್ತಿದ್ದ ನೆರೆಹಾವಳಿಗಳು 
* ಇಟ್ಟಿಗೆಗಳನ್ನು ಸುಡಲು ಮರಮುಟ್ಟುಗಳ ಅತಿಯಾದ ಬಳಕೆಯಿಂದ ಕಾಡುಗಳ ನಾಶ & ಇದರ ಪರಿಣಾಮವಾಗಿ ಜನರ ವಲಸೆ
* ಹೊರಗಿನಿಂದ ಬಂದ ಆರ್ಯರು ಹರಪ್ಪನ್ನರ ಮೇಲೆ ನಡೆಸಿರಬಹುದಾದ ಆಕ್ರಮಣ
* ಸಾಂಕ್ರಾಮಿಕ ರೋಗದ ಪ್ರಸಾರ 
* ಅವಶೇಷಗಳು & ದೊರೆತ ಸ್ಥಳಗಳು
* ಕಾಲಿಬಂಗನ್ - ನೆಲಹಾಸಿಗೆ, ಒಂಟೆ
* ಮೆಹೆಂಜೋ - ಇಟ್ಟಿಗೆ ಭಟ್ಟಿ, ಗಡ್ಡದಮನುಷ್ಯ, ಸಭಾಭವನ, ಸ್ತ್ರೀ, ಮಾತೃ ದೇವತೆ, ಪಶುಪತಿ, ಈಜುಕೊಳ (ಜಾನ್ ಮಾರ್ಷಲ್), ಶವಪೆಟ್ಟಿಗೆ 
* ಉಗ್ರಾಣ, ಕೊಡಲಿ- ಹರಪ್ಪ, ಮೆಹೆಂಜೋ, ಲೋಥಲ್
* ಬೆಂಕಿಯಿಂದ ನಾಶವಾದ ನಗರ - ಕೊಡವಾಜಿ 
* ಚರಂಡಿ ಇಲ್ಲದ ನಗರ - ಚಾನುದಾರೋ 
* ಕಲ್ಲಂಗಡಿ-ಹರಪ್ಪ 
* ಖರ್ಜೂರ, ಹತ್ತಿ -ಮೆಹೆಂಜೋ 
* ರಾಗಿ-ರಂಗಪುರ 
* ಭತ್ತ, ತಾಮ್ರದ ಕನ್ನಡಿ, ನರಿ, ಗಾಲಿ-ಲೋಥಾಲ್ 
* ಸ್ಕೇಲ್-ಮೆಹೆಂಜೋ, ಲೋಥಲ್ 
* ನೇಗಿಲು-ಕಾಲಿಬಂಗನ್ 
* ನಾಯಿ - ಮಾಂಡು 
* ಮರ-ಅರಳಿ 
* ಪ್ರಾಣಿ-ಗೂಳಿ 
* ಪಕ್ಷಿ-ಪಾರಿವಾಳ 
* ಯಜ್ಞಕುಂಡ-ಕಾಲಬಂಗನ್, ಲೋಥಾಲ್ 
* ವಿದೇಶಿ ವ್ಯಾಪಾರ-ಸೂಕ್ತಜೆಂಡರ್, ಲೋಥಲ್,ಬಾಲಸುರ್ 
* ಮೆಸಪೊಟೇಮಿಯಾ- ಮೆಲುಹ (ಫಲವತ್ತಾದ ಭೂಮಿ ಉಳ್ಳವರು)
* ಕುದುರೆ-ಸುರ್ ಕೋಟ್ 
*ಜಿಂಕೆ-ಆಂಮ್ರಿ 
* ದೊಡ್ಡ ನೆಲೆ - ಮೆಹೆಂಜೋದಾರೋ (ಲರ್ಖಾನ್ ಜಿಲ್ಲೆ)

Tuesday, 13 April 2021

ಇತಿಹಾಸದ ಬಗ್ಗೆ ಮಾಹಿತಿ.

     ಇತಿಹಾಸ 
* ಇತಿಹಾಸ ‌ ನಡೆದು ಹೋದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದೇ ಇತಿಹಾಸ.
* ಇತಿಹಾಸ ಮನುಷ್ಯರು ನಡೆದುಬಂದ ದಾರಿಯನ್ನು ಪರಿಚಯಿಸುತ್ತದೆ.
* ಮಾನವರ ಸಫಲತೆ ಮತ್ತು ವಿಫಲತೆಗಳನ್ನು ವಿವರಿಸುತ್ತದೆ 
* ಇತಿಹಾಸವು ಘಟನೆಗಳನ್ನು ವಿವರಿಸುವಾಗ ಕಾಲ ಸ್ಥಳ ಮತ್ತು ವ್ಯಕ್ತಿಯ ಕುರಿತು ನಿರ್ದಿಷ್ಟತೆ ಮತ್ತು ಖಚಿತತೆ ಹೊಂದಿರುತ್ತದೆ
* ಮನುಷ್ಯನಿಗೆ ಸ್ಮರಣಶಕ್ತಿ ಇದ್ದಂತೆ ಒಂದು ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ, ಅಷ್ಟೇ ಏಕೆ ಇಡೀ ಜಗತ್ತಿಗೆ ಇತಿಹಾಸವೇ ಸ್ಮರಣಶಕ್ತಿ 
* ಇತಿಹಾಸವನ್ನು ಹೇಗೆ ರಚಿಸಬೇಕು ಎಂಬುದನ್ನು ಜಗತ್ತಿಗೆ ಮೊಟ್ಟಮೊದಲು ತೋರಿಸಿಕೊಟ್ಟವರು - ಗ್ರೀಕ್ ನ ಹೆರೋಡೋಟಸ್
* ಆಧಾರವಿಲ್ಲದೆ ಇತಿಹಾಸವಿಲ್ಲ 
* ಇತಿಹಾಸದ ಆಧಾರಗಳಲ್ಲಿ ಎರಡು ವಿಧ ಸಾಹಿತ್ಯ ಆಧಾರಗಳು ಮತ್ತು ಪುರಾತತ್ವ ಆಧಾರಗಳು
* ಸಾಹಿತ್ಯ ಎಂದರೆ ಬರವಣಿಗೆ ಅಥವಾ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಂಗತಿಗಳು
* ಸಾಹಿತ್ಯ ಆಧಾರಗಳಲ್ಲಿ ಎರಡು ವಿಧ ಲಿಖಿತ ಸಾಹಿತ್ಯ ಮತ್ತು ಮೌಖಿಕ ಸಾಹಿತ್ಯ
* ಲಿಖಿತ ಸಾಹಿತ್ಯದಲ್ಲಿ ಎರಡು ವಿಧ ದೇಶಿಯ ಸಾಹಿತ್ಯ ಮತ್ತು ವಿದೇಶಿಯ ಸಾಹಿತ್ಯ
* ಮೌಖಿಕ ಸಾಹಿತ್ಯವು ಜನಪದ ಗೀತೆ, ಕಥೆ ಲಾವಣಿ ಐತಿಹ್ಯ ಮೊದಲಾದವುಗಳನ್ನು ಒಳಗೊಂಡಿರುತ್ತದೆ
* ಲಿಖಿತ ಸಾಹಿತ್ಯ ರಚಿಸುವವರು ಅಕ್ಷರಸ್ಥರಾದರೆ, ಮೌಖಿಕ ಸಾಹಿತ್ಯದ ರಚಿಸುವವರು ಅನಕ್ಷರಸ್ಥರಾಗಿರುತ್ತಾರೆ
* ಹಿಂದಿನ ಮಾನವರು ನಿರ್ಮಿಸಿದ ಮತ್ತು ಬಳಸಿದ ಭೌತಿಕ ವಸ್ತುಗಳ ಅವಶೇಷಗಳೇ ಪುರಾತತ್ವ ಆಧಾರಗಳು 
* ಭೂಮಿಯ ಒಳಗೆ ಹುದುಗಿಹೋಗಿರುವ ಅವಶೇಷಗಳನ್ನು ಉತ್ಖನನದ ಮೂಲಕ ಹೊರತೆಗೆಯಲಾಗುವುದು 
* ಪುರಾತತ್ವ ಆಧಾರಗಳ ವ್ಯಾಪ್ತಿಗೆ ಮಡಿಕೆ ಚೂರುಗಳು, ನಾಣ್ಯಗಳು, ಶಾಸನಗಳು, ಸ್ಮಾರಕಗಳು ಮತ್ತಿತರ ಅವಶೇಷಗಳು ಒಳಪಡುತ್ತದೆ 
* ಉತ್ಖನನ ಎಂದರೆ ಮಾನವನ ಪ್ರಾಚೀನ ಅವಶೇಷ ಮತ್ತು ಪಳೆಯುಳಿಕೆಗಳನ್ನು ಹೊರತೆಗೆಯಲು ನಡೆಸುವ ವೈಜ್ಞಾನಿಕ ಭೂಅಗೆತ
 
* ಯೂರೋಪಿಯನ್ನರು ಪರಿಚಯಿಸಿದ ಭಾರತ -
* ಭಾರತೀಯರಿಗೆ ಇತಿಹಾಸವು ಪುರಾಣ ಮತ್ತು ಐತಿಹ್ಯಗಳ ಆರೋಪದಲ್ಲಿ ಪ್ರಾಚೀನ ಕಾಲದಿಂದಲೂ ಪರಿಚಯವಿತ್ತು 
* ಆದರೆ ಇದು ಯುರೋಪಿಯನ್ನರು ರಚಿಸುವ ಇತಿಹಾಸದ ಮಾದರಿಗಿಂತ ಭಿನ್ನವಾದುದಾಗಿತ್ತು 
* ಜೆಸೂಟ್ (jesut)- ಇಗ್ನೇಷಿಯಸ್ ಲಯೋಲ ಎಂಬಾತನು 1534 ರಲ್ಲಿ ಪ್ಯಾರಿಸ್ನಲ್ಲಿ ಜೀಸಸ್ ಸಂಘ ಕಟ್ಟಿದನು 
* ಇದು ಪುರುಷ ಕ್ಯಾಥೋಲಿಕ್ ಪಂಥೀಯ ಧರ್ಮಾಸಕ್ತರ ಸಭೆಯಾಗಿತ್ತು 
* ಜೀಸಸ್ ಸಂಘದ ಸದಸ್ಯರು ಜೆಸ್ಯೂಟ್ ಗಳು 
* 16ನೇ ಶತಮಾನದ ನಂತರ ಭಾರತಕ್ಕೆ ಬಂದ ಯುರೋಪಿಯನ್ನರಲ್ಲಿ ಕೆಲವು ಜೆಸೂಟ್ ಪಾದ್ರಿಗಳಿದ್ದರು 
* ಜೆಸೂಟ್ ಪಾದ್ರಿಗಳು ಭಾರತೀಯರ ಜೀವನಕ್ರಮವನ್ನು ಅರ್ಥಮಾಡಿಕೊಳ್ಳಲು ವ್ಯವಸ್ಥಿತ ಅಧ್ಯಯನ ಕೈಗೊಂಡರು *
* ಅಗ್ರಾದಲ್ಲಿ ನೆಲೆಸಿದ್ದ ಹೆನ್ರಿಚ್ ರೋಥ್ ಎಂಬಾತನು ಇಂದಿಗೆ 350 ವರ್ಷಗಳ ಹಿಂದೆ ಸಂಸ್ಕೃತ ವ್ಯಾಕರಣವನ್ನು ಮೊದಲ ಬಾರಿಗೆ ಲ್ಯಾಟಿನ್ ಭಾಷೆಯಲ್ಲಿ ಬರೆದನು
* ಫಾದರ್ ಕಾರ್ಡಾಕ್ಸ್ ನು ಸಂಸ್ಕೃತ ಮತ್ತು ಯುರೋಪಿನ ಭಾಷೆಗಳ ನಡುವೆ ಸಂಬಂಧವಿದೆ ಎಂಬುದನ್ನು ಮೊದಲ ಬಾರಿಗೆ ಗುರುತಿಸಿದನು 
* ಇದೇ ಹೊತ್ತಿಗೆ ಬ್ರಿಟಿಷರಿಗೆ ಬಂಗಾಳದ ದಿವಾನಿ ಹಕ್ಕು ದೊರಕಿತ್ತು ಆದ್ದರಿಂದ ಬ್ರಿಟಿಷ್ ಅಧಿಕಾರಿಗಳು ಭಾರತೀಯರೊಂದಿಗೆ ವ್ಯವಹರಿಸುವ ಸಲುವಾಗಿ ಭಾರತೀಯರ ಇತಿಹಾಸ ಸಂಪ್ರದಾಯ ನಂಬಿಕೆ ಕಾನೂನುಗಳನ್ನು ಅರ್ಥ ಮಾಡಿಕೊಳ್ಳಲು ಮುಂದಾದ ಹಲವು ಆಡಳಿತಗಾರರು ಸಾಹಿತ್ಯ ಮತ್ತು ಸಂಸ್ಕೃತಿಯ ಕಡೆಗೆ ಆಕರ್ಷಿತರಾದರು 
* ಪರಿಣಾಮವಾಗಿ ಮನುಸ್ಮೃತಿ, ಭಗವದ್ಗೀತೆ ಮೊದಲಾದ ಅಭಿಜಾತ ಸಾಹಿತ್ಯ ಕೃತಿಗಳು ಇಂಗ್ಲಿಷ್ ಗೆ ಅನುವಾದಗೊಂಡವು
* ವಿಲಿಯಂ ಜೋನ್ಸ್
* ಭಾರತೀಯ ಶಾಸ್ತ್ರದ (ಇಂಡಾಲಜಿ) ಅಧ್ಯಯನಕ್ಕೆ ಮಹತ್ವದ ಹೆಜ್ಜೆಯಿಟ್ಟ ಬ್ರಿಟಿಷ್ ಅಧಿಕಾರಿ - ಸರ್ ವಿಲಿಯಂ ಜೋನ್ಸ್ 
* ಬಂಗಾಳದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದನು 
* 1784 ರಲ್ಲಿ ದಿ ಏಷ್ಯಾಟಿಕ್ ಸೊಸೈಟಿ ಎಂಬ ಸಂಸ್ಥೆಯನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿದ 
* ಗೀತ ಗೋವಿಂದ, ಮಾನವ ಧರ್ಮಶಾಸ್ತ್ರ, ಕಾಳಿದಾಸನ ಶಾಕುಂತಲ ನಾಟಕಗಳನ್ನು ಸಂಸ್ಕೃತದಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಿದನು

* ಮ್ಯಾಕ್ಸ್ ಮುಲ್ಲರ್ - *ಪ್ರಮುಖ ಪೌರಾತ್ಯಾವಾದಿ ಮತ್ತು ಭಾರತೀಯ ಶಾಸ್ತ್ರಜ್ಞ 
* ಜರ್ಮನ್ ದೇಶದವರು * ಕೃತಿ- ಸೇಕ್ರೆಡ್ ಬುಕ್ ಆಫ್ ದಿ ಹೆಸರಿನ 50 ಸಂಪುಟಗಳನ್ನು ತಂದರು 
* ಜೇಮ್ಸ್ ಮಿಲ್ - ಸ್ಕಾಟ್ಲ್ಯಾಂಡ್ ಇತಿಹಾಸಕಾರ * ಉಪಯುಕ್ತವಾದಿಗಳ ಗುಂಪಿಗೆ ಸೇರುತ್ತಾರೆ *
* ಹಿಸ್ಟರಿ ಆಫ್ ಇಂಡಿಯಾ ಹೆಸರಿನಲ್ಲಿ 6 ಸಂಪುಟಗಳ ಭಾರತ ಇತಿಹಾಸ ರಚಿಸಿದರು 
* ಆದರೆ ಮ್ಯಾಕ್ಸ್ ಮುಲ್ಲರ್ ಆಗಲಿ ಜೇಮ್ಸ್ ಮಿಲ್ ಆಗಲಿ ಎಂದು ಭಾರತಕ್ಕೆ ಬಂದವರಲ್ಲ 
* ಅಬೆ ಡುಬಾಯ್ಸ್ - ಫ್ರೆಂಚ್ ಮಿಷನರಿ
* ಶ್ರೀರಂಗಪಟ್ಟಣ ಬಳಿಯ ಗಂಜಾಂಗೆ ಬಂದು ನೆಲೆಸಿದರು 
* ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸಂನ್ಯಾಸಿಯಂತೆ ಬದುಕಿದ ಇವರನ್ನು ಜನರು ದೊಡ್ಡ ಸ್ವಾಮಿಯವರು ಎಂದು    
ಕರೆಯುತ್ತಿದ್ದರು 
* ಹಿಂದೂ ಮ್ಯಾನೆರ್ಸ್ ಕಸ್ಟಮ್ಸ್ ಸೆರೆಮನಿಸ್ ಎಂಬ ಕೃತಿ ಬರೆದವರು 
* ಇದರಲ್ಲಿ ಭಾರತೀಯರ ಆಚಾರ-ವಿಚಾರ ಹಬ್ಬಹರಿದಿನ ವರ್ಣಾಶ್ರಮ ವ್ಯವಸ್ಥೆ ಮೊದಲಾದವುಗಳನ್ನು ಕುರಿತು ಬರೆದಿದ್ದಾರೆ 
* 24 ವರ್ಷ ಕಾಲ ಇಲ್ಲಿಯೇ ನೆಲೆಸಿದ್ದು ಅನಂತರ ಫ್ರಾನ್ಸಿಗೆ ಹಿಂದಿರುಗಿದರು 
* ಇವರಲ್ಲದೆ ಎಲ್ಫಿನ್ ಸ್ಟನ್, ಕೋಲ್ ಬ್ರೂಕ್, ಕನ್ನಿಂಗ್ಹ್ಯಾಮ್, ಇಲಿಯಟ್, ಡಾಸನ್ ಮುಂತಾದವರು ಭಾರತದ ಚರಿತ್ರೆಯ ವಿವಿಧ 
ಘಟ್ಟಗಳನ್ನು ಪರಿಚಯಿಸಿದ್ದಾರೆ 
* ಫ್ರಾನ್ಸಿಸ್ ಬುಕನಾನ್, ಕರ್ನಲ್ ವಿಲ್ಕ್ಸ್, ಮೆಕೆಂಜಿ, ಬಿ ಎಲ್ ರೈಸ್, ಪ್ಲೀಟ್ ಮುಂತಾದವರು ನಾಟಕದ ಚರಿತ್ರೆಯ ರಚನೆಗೆ 
ಅಮೂಲ್ಯ ಆಧಾರಗಳಾದ ಶಾಸನಗಳು, ಕೈಫಿಯತ್ತುಗಳು, ಹಸ್ತಪ್ರತಿಗಳು, ಬಕೈರುಗಳು ಮೊದಲಾದವುಗಳನ್ನು ಸಂಗ್ರಹಿಸುವಲ್ಲಿ ಮತ್ತು 
ಸಂಗತಿಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ 
* ಭಾರತೀಯರಿಗೆ ಹೊಸ ಮಾದರಿ ಚರಿತ್ರೆ ನೋಡುವ ಮತ್ತು ಕಟ್ಟುವ ಕ್ರಮವನ್ನು ಯುರೋಪಿಯನ್ನರು ಕಲಿಸುವಲ್ಲಿ ಸಫಲರಾದರು 
* ಯುರೋಪಿಯನ್ನರು ಭಾರತೀಯರ ಆಲೋಚನಾ ಕ್ರಮವನ್ನೇ ಬದಲಿಸಿದರು 
* ಪೌರಾತ್ಯವಾದಿಗಳು (Orientalists)- ಪೂರ್ವ ದೇಶಗಳ ಇತಿಹಾಸ, ಸಂಸ್ಕೃತಿ, ಆಧ್ಯಾತ್ಮ ಮುಂತಾದವುಗಳ ಬಗ್ಗೆ ಒಲವುಳ್ಳ ಯುರೋಪಿನ ವಿದ್ವಾಂಸರು 

ಸಿಂಧೂ/ ಹರಪ್ಪ ನಾಗರಿಕತೆ ನೋಟ್ಸ್

* ಸಿಂಧೂನಾಗರಿಕತೆ :-  * ಪತ್ತೆ ಹಚ್ಚಿದ್ದು - ಕನ್ನಿಂಗ್ ಹ್ಯಾಂ  * ಈಸ್ಟ್ ಇಂಡಿಯಾ ಕಂಪನಿಯ ಸೇವೆಯಲ್ಲಿದ್ದ ಚಾರ್ಲ್ಸ್ ಮ್ಯಾಸನ್ (Charles Masson) ಮೊದಲ ಬಾರಿಗೆ 18...